ಲೇಖನಗಳು

ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ ಪಠಿಸಿ

ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ ಪಠಿಸಿ

ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ ಪಠಿಸುವುದು ಕನ್ನಡಿಗರ ಆಶಯ. ಅದರಂತೆ ನಾವು ಈ ಲೇಖನದಲ್ಲಿ ಹನುಮಾನ್ ಮಂತ್ರಗಳನ್ನು ಕನ್ನಡ ಭಾಷೆಯಲ್ಲಿ ಒದಗಿಸುವ ಪ್ರಯತ್ನವನ್ನು ಮಾಡಿರುತ್ತೇವೆ. ಹನುಮಾನ್ ಮಂತ್ರಗಳನ್ನು ಭಕ್ತಿಯಿಂದ ಪಠಿಸಿ ಸಂಕಟ ವಿಮೋಚನಾ ಹನುಮಾನ್ ದೇವರ ಕೃಪೆಗೆ ಪಾತ್ರರಾಗೋಣ ಬನ್ನಿ ಈಗ ಮೊದಲಿಗೆ ಹನುಮಾನ್ ಮಂತ್ರವನ್ನು ಪಠಿಸೋಣ.

ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ

ಹನುಮಾನ್ ಮಂತ್ರ

ಓo ಶ್ರೀ ವಜ್ರದೇಹಯಾ, ಭಗವಾನ್ ರಾಮಚಂದ್ರನ ಭಕ್ತ, ವಾಯುಪುತ್ರ, ನಾನು ನಿಮಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಹನುಮಾನ್ ಮಂತ್ರ

ಹನುಮಾನ್ ಬೀಜ ಮಂತ್ರ

|| ಓಂ ಐಂ ಬ್ರಿಂ ಹನುಮಾನ್,
ಓಮೇ ಶ್ರೀರಾಮ ದೂತಾಯ ನಮಃ: ||

ಹನುಮಾನ್ ಬೀಜ ಮಂತ್ರ

ಹನುಮಾನ್ ಮೂಲ ಮಂತ್ರ

| ಓಂ ಶ್ರೀ ಹನುಮಾನ್ ನಮಃ ||

ಹನುಮಾನ್ ಮೂಲ ಮಂತ್ರ
ಹನುಮಾನ್ ಮೂಲ ಮಂತ್ರ

ಹನುಮಾನ್ ಗಾಯತ್ರಿ ಮಂತ್ರ

|| ॐ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।
ತನ್ನೋ ಹನುಮಾನ್ ಪ್ರಚೋದಯಾತ್ ||

ಹನುಮಾನ್ ಗಾಯತ್ರಿ ಮಂತ್ರ
ಹನುಮಾನ್ ಗಾಯತ್ರಿ ಮಂತ್ರ

ಮನೋಜವಂ ಮಾರುತತುಲ್ಯವೇಗಂ ಮಂತ್ರ

“ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಂ.
ವತಾತ್ಮಜಂ ವಾನರಯುತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥”

ಮನೋಜವಂ ಮಾರುತತುಲ್ಯವೇಗಂ ಮಂತ್ರ
ಮನೋಜವಂ ಮಾರುತತುಲ್ಯವೇಗಂ ಮಂತ್ರ

ಹನುಮಾನ್ ಶ್ಲೋಕಗಳು

ಶೃಣು ದೇವಿ ಪ್ರವಕ್ಷ್ಯಾಮಿ ಸ್ತೋತ್ರಂ ಸರ್ವಭಯಾಪಹಮ್ |
ಸರ್ವಕಾಮಪ್ರದಂ ನೄಣಾಂ ಹನೂಮತ್ ಸ್ತೋತ್ರಮುತ್ತಮಮ್ || ೧ ||

ತಪ್ತಕಾಂಚನಸಂಕಾಶಂ ನಾನಾರತ್ನವಿಭೂಷಿತಮ್ |
ಉದ್ಯದ್ಬಾಲಾರ್ಕವದನಂ ತ್ರಿನೇತ್ರಂ ಕುಂಡಲೋಜ್ಜ್ವಲಮ್ || ೨ ||

ಮೌಂಜೀಕೌಪೀನಸಂಯುಕ್ತಂ ಹೇಮಯಜ್ಞೋಪವೀತಿನಮ್ |
ಪಿಂಗಳಾಕ್ಷಂ ಮಹಾಕಾಯಂ ಟಂಕಶೈಲೇಂದ್ರಧಾರಿಣಮ್ || ೩ ||

ಶಿಖಾನಿಕ್ಷಿಪ್ತವಾಲಾಗ್ರಂ ಮೇರುಶೈಲಾಗ್ರಸಂಸ್ಥಿತಮ್ |
ಮೂರ್ತಿತ್ರಯಾತ್ಮಕಂ ಪೀನಂ ಮಹಾವೀರಂ ಮಹಾಹನುಮ್ || ೪ ||

ಹನುಮಂತಂ ವಾಯುಪುತ್ರಂ ನಮಾಮಿ ಬ್ರಹ್ಮಚಾರಿಣಮ್ |
ತ್ರಿಮೂರ್ತ್ಯಾತ್ಮಕಮಾತ್ಮಸ್ಥಂ ಜಪಾಕುಸುಮಸನ್ನಿಭಮ್ || ೫ ||

ನಾನಾಭೂಷಣಸಂಯುಕ್ತಂ ಆಂಜನೇಯಂ ನಮಾಮ್ಯಹಮ್ |
ಪಂಚಾಕ್ಷರಸ್ಥಿತಂ ದೇವಂ ನೀಲನೀರದಸನ್ನಿಭಮ್ || ೬ ||

ಪೂಜಿತಂ ಸರ್ವದೇವೈಶ್ಚ ರಾಕ್ಷಸಾಂತಂ ನಮಾಮ್ಯಹಮ್ |
ಅಚಲದ್ಯುತಿಸಂಕಾಶಂ ಸರ್ವಾಲಂಕಾರಭೂಷಿತಮ್ || ೭ ||

ಷಡಕ್ಷರಸ್ಥಿತಂ ದೇವಂ ನಮಾಮಿ ಕಪಿನಾಯಕಮ್ |
ತಪ್ತಸ್ವರ್ಣಮಯಂ ದೇವಂ ಹರಿದ್ರಾಭಂ ಸುರಾರ್ಚಿತಮ್ || ೮ ||

ಸುಂದರಂ ಸಾಬ್ಜನಯನಂ ತ್ರಿನೇತ್ರಂ ತಂ ನಮಾಮ್ಯಹಮ್ |
ಅಷ್ಟಾಕ್ಷರಾಧಿಪಂ ದೇವಂ ಹೀರವರ್ಣಸಮುಜ್ಜ್ವಲಮ್ || ೯ ||

ನಮಾಮಿ ಜನತಾವಂದ್ಯಂ ಲಂಕಾಪ್ರಾಸಾದಭಂಜನಮ್ |
ಅತಸೀಪುಷ್ಪಸಂಕಾಶಂ ದಶವರ್ಣಾತ್ಮಕಂ ವಿಭುಮ್ || ೧೦ ||

ಜಟಾಧರಂ ಚತುರ್ಬಾಹುಂ ನಮಾಮಿ ಕಪಿನಾಯಕಮ್ |
ದ್ವಾದಶಾಕ್ಷರಮಂತ್ರಸ್ಯ ನಾಯಕಂ ಕುಂತಧಾರಿಣಮ್ || ೧೧ ||

ಅಂಕುಶಂ ಚ ದಧಾನಂ ಚ ಕಪಿವೀರಂ ನಮಾಮ್ಯಹಮ್ |
ತ್ರಯೋದಶಾಕ್ಷರಯುತಂ ಸೀತಾದುಃಖನಿವಾರಿಣಮ್ || ೧೨ ||

ಪೀತವರ್ಣಂ ಲಸತ್ಕಾಯಂ ಭಜೇ ಸುಗ್ರೀವಮಂತ್ರಿಣಮ್ |
ಮಾಲಾಮಂತ್ರಾತ್ಮಕಂ ದೇವಂ ಚಿತ್ರವರ್ಣಂ ಚತುರ್ಭುಜಮ್ || ೧೩ ||

ಪಾಶಾಂಕುಶಾಭಯಕರಂ ಧೃತಟಂಕಂ ನಮಾಮ್ಯಹಮ್ |
ಸುರಾಸುರಗಣೈಃ ಸರ್ವೈಃ ಸಂಸ್ತುತಂ ಪ್ರಣಮಾಮ್ಯಹಮ್ || ೧೪ ||

ಏವಂ ಧ್ಯಾಯೇನ್ನರೋ ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ |
ಪ್ರಾಪ್ನೋತಿ ಚಿಂತಿತಂ ಕಾರ್ಯಂ ಶೀಘ್ರಮೇವ ನ ಸಂಶಯಃ || ೧೫ ||

ಇತ್ಯುಮಾಸಂಹಿತಾಯಾಂ ಆಂಜನೇಯ ಸ್ತೋತ್ರಮ್ |

ಹನುಮಾನ್ ಚಾಲೀಸಾ ಮಂತ್ರ (ಸಂಪೂರ್ಣ ಪರಿಚಯ)

ಹನುಮಾನ್ ಮಂತ್ರಗಳನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳೇನೆಂದು ತಿಳಿದುಕೊಳ್ಳಿ

ಹನುಮಾನ್ ಮಂತ್ರಗಳನ್ನು ಪಠಿಸುವುದರಿಂದ ಭಕ್ತರು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಮಂತ್ರಗಳು ಭಕ್ತರಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯಕವಾಗಿವೆ.

ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ: ಹನುಮಾನ್ ಮಂತ್ರಗಳು ನಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಇದು ಹನುಮಾನ್ ಮಂತ್ರವನ್ನು ಪಠಣ ಮಾಡುವ ಭಕ್ತರಿಗೆ ಸಂಜೀವಿನಿ ಪರ್ವತವನ್ನು ಹೊತ್ತು ತಂದ ಆಂಜನೇಯನ ಸಾಮರ್ಥ್ಯದಂತೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ.

ಭೂತ ಚೇಷ್ಟೆಗಳಿಂದ ಮುಕ್ತಿ: ಹನುಮಾನ್ ಮಂತ್ರದ ನಿಯಮಿತ ಪಠಣವು ದುಷ್ಟ ಶಕ್ತಿಗಳು ಮತ್ತು ವಾಮಾಚಾರ ಮುಂತಾದ ದುಷ್ಟ ಕಾರ್ಯಗಳಿಂದ ರಕ್ಷಣೆ ನೀಡುತ್ತವೆ.

ಕುಸ್ತಿಪಟುಗಳ ಮಂತ್ರ: ಕುಸ್ತಿ ಪಟುಗಳು ತಮ್ಮ ಗರಡಿ ಮನೆಗಳಲ್ಲಿ ಆಂಜನೇಯನ ಆರಾಧನೆ ಮಾಡುತ್ತಾರೆ. ಈ ಮಂತ್ರದ ಪಠನೆಯಿಂದ ಅವರಲ್ಲಿ ಗೆಲುವಿಗೆ ಅಗತ್ಯವಾದ ಚೈತನ್ಯ ದೊರೆಯುತ್ತದೆ.

ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ: ಹನುಮಾನ್ ಮಂತ್ರವು ಜನರ ಸುತ್ತ ಇರುವ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ಅದರಿಂದ ಹೊರಬರಲು ಅನುಕೂಲ ಮಾಡಿಕೊಡುತ್ತದೆ.

ಭಯ ಮತ್ತು ಫೋಬಿಯಾಗಳನ್ನು ದೂರ ಮಾಡುತ್ತದೆ: ಹನುಮಾನ್ ಮಂತ್ರ ಪಠನೆಯಿಂದ ಭಯ ಮತ್ತು ಫೋಬಿಯಾಗಳನ್ನು ದೂರ ಮಾಡಿಕೊಳ್ಳಬಹುದು.

ರಕ್ಷಣಾ ಕವಚ: ಹನುಮಾನ್ ಮಂತ್ರವು ಶತ್ರುಗಳ ಕಾಟದಿಂದ ಪಾರಾಗಲು ಉತ್ತಮ ಪರಿಹಾರವಾಗಿರುತ್ತದೆ.

ಏಕಾಗ್ರತೆಯನ್ನು ನೀಡುವ ಮಂತ್ರ: ಹನುಮಾನ್ ಮಂತ್ರವು ನಿಮಗೆ ಏಕಾಗ್ರತೆಯನ್ನು ಒದಗಿಸುವ ಮಂತ್ರವಾಗಿದೆ.

ದೇಹವನ್ನು ಶುದ್ಧಿಗೊಳಿಸುತ್ತದೆ: ಹನುಮಾನ್ ಮಂತ್ರವು ದೇಹವನ್ನು ದುಷ್ಟ ಶಕ್ತಿಗಳ ಮತ್ತು ಕೆಟ್ಟ ಯೋಚನೆಗಳ ಪ್ರಭಾವದಿಂದ ಮುಕ್ತಿಯನ್ನು ಪಡೆಯುತ್ತದೆ.

ಕಣ್ಣು ದೃಷ್ಟಿಯಿಂದ ರಕ್ಷಣೆ: ಹನುಮಾನ್ ಮಂತ್ರವು ಕಣ್ಣು ದೃಷ್ಟಿಯಿಂದ ರಕ್ಷಣೆ ನೀಡುತ್ತದೆ.

ಒತ್ತಡದಿಂದ ಮುಕ್ತಿ: ಹನುಮಾನ್ ಮಂತ್ರವನ್ನು ಪ್ರಾತಃಕಾಲದಲ್ಲಿ ಪಠಿಸುವುದರಿಂದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಮತ್ತು ನೀವು ನಿಮ್ಮ ಜೀವನದ ಸಂಪೂರ್ಣ ನಿಯಂತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ.

ಚೇತರಿಕೆ ಒದಗಿಸುತ್ತದೆ: ಹನುಮಾನ್ ಮಂತ್ರವು ಕಷ್ಟಗಳಿಂದ ಚೇತರಿಕೆ ದೊರೆಯುತ್ತದೆ.

ಆರೋಗ್ಯದ ಮಂತ್ರ: ಹನುಮಾನ್ ಮಂತ್ರವು ಆರೋಗ್ಯ ಸಮಸ್ಯೆಗಳಿಗೆ ಸಹಾಯಕವಾಗಿದೆ.

ಶಕ್ತಿಯ ಮೂಲ: ಹನುಮಾನ್ ಶಕ್ತಿ ಮತ್ತು ಚೈತನ್ಯದ ಮೂಲವಾಗಿದ್ದು, ಆರೋಗ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವಾಗ ಸ್ಮರಿಸುತ್ತೇವೆ.

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ: ಹನುಮಾನ್ ಮಂತ್ರವು ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಕಾಟಗಳಿಂದ ನಮ್ಮನು ಪಾರುಮಾಡುತ್ತದೆ.

ಹನುಮಾನ್ ಮಂತ್ರಗಳನ್ನು ಪಠಿಸುವ ವಿಧಾನ ಮತ್ತು ಹನುಮಾನ್ ಮಂತ್ರಗಳನ್ನು ಪಠಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಹನುಮಾನ್ ಮಂತ್ರಗಳನ್ನು ಪಠಿಸುವ ವಿಧಾನಗಳು ಮತ್ತು ಮುನ್ನೆಚ್ಚರಿಕೆಗಳು ಅತ್ಯಂತ ಮುಖ್ಯವಾಗಿವೆ. ಈ ವಿಧಾನಗಳು ಮಂತ್ರಗಳ ಪಠಣದಿಂದ ಸಿಗುವ ಫಲಿತಾಂಶಗಳನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಶಕ್ತಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಹಾಯ ಮಾಡುತ್ತವೆ.

ಹನುಮಾನ್ ಮಂತ್ರಗಳನ್ನು ಪಠಿಸುವ ವಿಧಾನ:

  1. ಸಮಯ ನಿರ್ಧಾರ: ಹನುಮಾನ್ ಮಂತ್ರಗಳನ್ನು ಪಠಿಸಲು ಉತ್ತಮ ಸಮಯ ಶನಿವಾರ ಮತ್ತು ಸೂರ್ಯೋದಯದ ಸಮಯವಾಗಿದೆ. ಈ ಸಮಯಗಳಲ್ಲಿ ಮಂತ್ರಗಳ ಪಠಣವು ಅತ್ಯಂತ ಫಲಪ್ರದವಾಗಿದೆ.
  2. ಪಠಣದ ಸಂಖ್ಯೆ: ಹನುಮಾನ್ ಮಂತ್ರವನ್ನು ಪ್ರತಿದಿನ 108 ಬಾರಿ ಮತ್ತು 40 ದಿನಗಳವರೆಗೆ 1100 ಬಾರಿ ಪಠಿಸಬಹುದು. ಈ ಸಂಖ್ಯೆಯ ಪಠಣವು ಮಂತ್ರಗಳ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಬಹುದು.
  3. ಮುಖದ ದಿಕ್ಕು: ಹನುಮಾನ್ ಮಂತ್ರಗಳನ್ನು ಪಠಿಸುವಾಗ ಪೂರ್ವ ದಿಕ್ಕಿನತ್ತ ಮುಖ ಮಾಡಿ ಕುಳಿತುಕೊಳ್ಳಬೇಕು. ಇದು ಮಂತ್ರಗಳ ಪಠಣದಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತದೆ.

ಹನುಮಾನ್ ಮಂತ್ರಗಳನ್ನು ಪಠಿಸುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  1. ಶುದ್ಧತೆ: ಮಂತ್ರಗಳ ಪಠಣವನ್ನು ಆರಂಭಿಸುವ ಮೊದಲು ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕು. ಇದು ಮಂತ್ರಗಳ ಪಠಣದಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತದೆ.
  2. ಏಕಾಗ್ರತೆ: ಮಂತ್ರಗಳ ಪಠಣದ ಸಮಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳಬೇಕು. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ, ಮಂತ್ರಗಳ ಮೇಲೆ ಪೂರ್ಣ ಗಮನವನ್ನು ಇಡಬೇಕು.
  3. ನಿಷ್ಠೆ ಮತ್ತು ಭಕ್ತಿ: ಮಂತ್ರಗಳ ಪಠಣವನ್ನು ನಿಷ್ಠೆ ಮತ್ತು ಭಕ್ತಿಯಿಂದ ಮಾಡಬೇಕು. ಇದು ಮಂತ್ರಗಳ ಶಕ್ತಿಯನ್ನು ಹೆಚ್ಚಿಸಲು ಮತ್ತು ಅವುಗಳ ಫಲಿತಾಂಶಗಳನ್ನು ಸಂಪೂರ್ಣವಾಗಿ ಅನುಭವಿಸಲು ಸಹಾಯಕವಾಗಬಹುದು.

ಈ ವಿಧಾನಗಳು ಮತ್ತು ಮುನ್ನೆಚ್ಚರಿಕೆಗಳು ಹನುಮಾನ್ ಮಂತ್ರಗಳ ಪಠಣದಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತವೆ ಮತ್ತು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತವೆ.

ನಿಷ್ಕರ್ಷೆ

ಈ ಲೇಖನದಲ್ಲಿ ಹನುಮಾನ್ ಮಂತ್ರಗಳನ್ನು ಮತ್ತು ಹನುಮಾನ್ ಶ್ಲೋಕಗಳನ್ನು ಕನ್ನಡ ಭಾಷೆಯಲ್ಲಿ ನಿಮಗೆ ಒದಗಿಸುವ ಪ್ರಯತ್ನ ಮಾಡಿರುತ್ತೇವೆ ಜೊತೆಗೆ ಹನುಮಾನ್ ಮಂತ್ರವನ್ನು ಪಠಿಸುವುದರಿಂದ ಸಿಗುವ ಲಾಭಗಳು, ಹನುಮಾನ್ ಮಂತ್ರವನ್ನು ಪಠಿಸುವ ವಿದಾನ ಮತ್ತು ಹನುಮಾನ್ ಮಂತ್ರವನ್ನು ಪಠಿಸುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿಸಿರುತ್ತೇವೆ. ನಮ್ಮ ಈ ಚಿಕ್ಕ ಪ್ರಯತ್ನ ನಿಮಗೆ ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ ಓದಲು ಸಹಾಯ ಮಾಡಿದೆ ಎಂದು ಬಾವಿಸಿರುತ್ತೇವೆ. ಧನ್ಯವಾದ.

Leave a Comment